ಟೀಮ್ ಇಂಡಿಯಾ ವಿರುದ್ಧ ಪಾಕಿಸ್ತಾನ ತಂಡ ಗೆಲ್ಲಲಿ'-ಭಾರತೀಯ ಕ್ರಿಕೆಟಿಗನ ಶಾಕಿಂಗ್ ಹೇಳಿಕೆ

"ನಾನು 90 ರ ದಶಕದಲ್ಲಿ ಆಡುತ್ತಿದ್ದಾಗ, ಪಾಕಿಸ್ತಾನವು ವಾಸಿಮ್ ಅಕ್ರಮ್, ವಕಾರ್ ಯೂನಿಸ್ ಮತ್ತು ಸಯೀದ್ ಅನ್ವರ್ ರಂತಹ ಅನೇಕ ಉತ್ತಮ ಆಟಗಾರರನ್ನು ಹೊಂದಿತ್ತು, ಆದರೆ ಈಗ ಪಾಕ್ ತಂಡ ಈ ಹಿಂದಿನ ತಂಡದಷ್ಟು ಬಲಿಷ್ಠವಾಗಿಲ್ಲ ಎಂದು ಹೇಳಿದರು.

Written by - Manjunath N | Last Updated : Feb 22, 2025, 04:14 PM IST
  • ಯಾವಾಗ ಪಂದ್ಯಗಳು ಏಕಪಕ್ಷೀಯವಾಗಿರುತ್ತವೆ ಆಗ ರೋಮಾಂಚನವನ್ನು ಕಡಿಮೆ ಮಾಡುತ್ತದೆ
  • ಹಾಗಾಗಿ ಅದು 'ಪಾಕಿಸ್ತಾನ ಗೆಲ್ಲಬೇಕೆಂದು ನಾನು ಬಯಸುತ್ತೇನೆ
  • ಏಕೆಂದರೆ ಇದು ಪಂದ್ಯಾವಳಿಯ ಉಳಿದ ಭಾಗಗಳನ್ನು ಹೆಚ್ಚು ರೋಮಾಂಚನಗೊಳಿಸುತ್ತದೆ.
ಟೀಮ್ ಇಂಡಿಯಾ ವಿರುದ್ಧ ಪಾಕಿಸ್ತಾನ ತಂಡ ಗೆಲ್ಲಲಿ'-ಭಾರತೀಯ ಕ್ರಿಕೆಟಿಗನ ಶಾಕಿಂಗ್ ಹೇಳಿಕೆ title=

ನವದೆಹಲಿ: ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ವಿರುದ್ಧ ಪಾಕ್ ತಂಡವು ಗೆಲ್ಲಬೇಕೆಂದು ಭಾರತ ತಂಡದ ಮಾಜಿ ಆಟಗಾರ ಅತುಲ್ ವಾಸನ್ ಹೇಳಿದ್ದಾರೆ.ಈಗ ಟೀಮ್ ಇಂಡಿಯಾದ ಮಾಜಿ ಆಟಗಾರನ ಹೇಳಿಕೆ ಈಗ ಎಲ್ಲರನ್ನೂ ಅಚ್ಚರಿಗೊಳಿಸಿದೆ.

ಇದನ್ನೂ ಓದಿ: ಡಿವೋರ್ಸ್ ಗೆ ಇದೇ ಮುಖ್ಯ ಕಾರಣ !ಕಳೆದ 18 ತಿಂಗಳಲ್ಲಿ ಇಷ್ಟೆಲ್ಲಾ ನಡೆದಿತ್ತು ಎಂದು ನ್ಯಾಯಾಲಯಕ್ಕೆ ವಿವರಿಸಿದ ಧನಶ್ರೀ! ಸ್ಟಾರ್ ಜೋಡಿ ವಿಚ್ಛೇದನಕ್ಕೆ ಅಧಿಕೃತ ಮುದ್ರೆ ಒತ್ತಿದ ಕೋರ್ಟ್!

ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಗಳು ಏಕಪಕ್ಷೀಯವಾಗಿವೆ ಎಂದು ಹೇಳಿರುವ ಅತುಲ್ ವಾಸನ್ ಭಾರತದ ವಿರುದ್ಧದ ಪಂದ್ಯಗಳನ್ನು ಅಮಿತಾಬ್ ಬಚ್ಚನ್ ಅವರ ಸಿನಿಮಾಗಳಿಗೆ ಹೋಲಿಸಿದ್ದಾರೆ.

'ಪಂದ್ಯಗಳು ಯಾವಾಗ ಏಕಪಕ್ಷೀಯವಾಗಿರುತ್ತವೆ ಆಗ ರೋಮಾಂಚನವನ್ನು ಕಡಿಮೆ ಮಾಡುತ್ತದೆ ಹಾಗಾಗಿ ಅದು 'ಪಾಕಿಸ್ತಾನ ಗೆಲ್ಲಬೇಕೆಂದು ನಾನು ಬಯಸುತ್ತೇನೆ, ಏಕೆಂದರೆ ಇದು ಪಂದ್ಯಾವಳಿಯ ಉಳಿದ ಭಾಗಗಳನ್ನು ಹೆಚ್ಚು ರೋಮಾಂಚನಗೊಳಿಸುತ್ತದೆ.ಪಾಕಿಸ್ತಾನ ಚೆನ್ನಾಗಿ ಆಡಿ ಗೆದ್ದರೆ ಅದು ನಿಜವಾದ ಸ್ಪರ್ಧೆಯಾಗುತ್ತದೆ.ಪಾಕಿಸ್ತಾನ ಮತ್ತೆ ಚೇತರಿಸಿಕೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ.ಚೇತರಿಸಿಕೊಂಡರೆ ಇದು ಈ ಪಂದ್ಯಾವಳಿಗೆ ಒಳ್ಳೆಯದು ಎಂದು ಅವರು ಹೇಳಿದ್ದಾರೆ. 

ಇದನ್ನೂ ಓದಿ: ಡಿವೋರ್ಸ್‌ ಬಳಿಕ ಈ ಖ್ಯಾತ ನಟಿಯೊಂದಿಗೆ ಪ್ರೀತಿಯಲ್ಲಿ ಬಿದ್ದ ಶಿಖರ್‌ ಧವನ್!‌ ಬಹಿರಂಗವಾಗಿ ಸತ್ಯ ಒಪ್ಪಿಕೊಂಡ ಸ್ಟಾರ್‌ ಕ್ರಿಕೆಟರ್‌..

ಅತುಲ್ ವಾಸನ್ 1990 ಮತ್ತು 1991 ರ ನಡುವೆ ಭಾರತ ಪರ 4 ಟೆಸ್ಟ್ ಮತ್ತು 9 ಏಕದಿನ ಪಂದ್ಯಗಳನ್ನು ಆಡಿದ್ದಾರೆ.ಪಾಕಿಸ್ತಾನ ತನ್ನ ಕ್ರಿಕೆಟ್ ಅನ್ನು ಸುಧಾರಿಸುವವರೆಗೆ ಭಾರತ ಮತ್ತು ಪಾಕಿಸ್ತಾನ ಪಂದ್ಯವನ್ನು ವೀಕ್ಷಿಸಲು ಯಾವುದೇ ಉತ್ಸಾಹವಿರುವುದಿಲ್ಲ' ಎಂದು ಅತುಲ್ ವಾಸನ್ ಹೇಳಿದ್ದಾರೆ.

"ನಾನು 90 ರ ದಶಕದಲ್ಲಿ ಆಡುತ್ತಿದ್ದಾಗ, ಪಾಕಿಸ್ತಾನವು ವಾಸಿಮ್ ಅಕ್ರಮ್, ವಕಾರ್ ಯೂನಿಸ್ ಮತ್ತು ಸಯೀದ್ ಅನ್ವರ್ ರಂತಹ ಅನೇಕ ಉತ್ತಮ ಆಟಗಾರರನ್ನು ಹೊಂದಿತ್ತು, ಆದರೆ ಈಗ ಪಾಕ್ ತಂಡ ಈ ಹಿಂದಿನ ತಂಡದಷ್ಟು ಬಲಿಷ್ಠವಾಗಿಲ್ಲ ಎಂದು ಹೇಳಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News