Turtle Vastu: ವಾಸ್ತು ಸಲಹೆಗಳು ಹಿಂದೂ ಪುರಾಣದ ಪ್ರಕಾರ, ಆಮೆಯನ್ನು ವಿಷ್ಣುವಿನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಭಗವಾನ್ ವಿಷ್ಣುವು ಕೂರ್ಮ ಅವತಾರದಲ್ಲಿ ಕಾಣಿಸಿಕೊಂಡು ತನ್ನ ಅದ್ಭುತ ಮಹಿಮೆಗಳನ್ನು ಪ್ರದರ್ಶಿಸಿದನೆಂದು ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಅದಕ್ಕಾಗಿಯೇ ಆಮೆ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಆಮೆಯನ್ನು ಸಾಕುವುದರಿಂದ ಎಲ್ಲಾ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗಿ ಸಂಪತ್ತು ವೃದ್ಧಿಯಾಗುತ್ತದೆ ಎಂದು ಅನೇಕ ಜನರು ನಂಬುತ್ತಾರೆ. ಆದಾಗ್ಯೂ, ಆಮೆಗಳು ಅಥವಾ ಆಮೆಯ ಪ್ರತಿಮೆಗಳನ್ನು ಮನೆಯಲ್ಲಿ ಇಡಲು ಬಯಸುವವರು ಸರಿಯಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ವಾಸ್ತು ತಜ್ಞರು ಸಲಹೆ ನೀಡುತ್ತಾರೆ.
ಆಮೆಯನ್ನು ಹೇಗಂದರಾಗೆ ಇರುಸುವುದರಿಂದ ನಿಮ್ಮ ಮನೆಯಲ್ಲಿ ಸಂತೋಷದ ಬದಲು ತೊಂದರೆಗಳು ಎದುರಾಗುತ್ತವೆ ಎಂದು ಹೇಳಲಾಗುತ್ತದೆ. ಆದ್ದರಿಂದ ಮನೆಯಲ್ಲಿ ಆಮೆಯ ವಿಗ್ರಹವನ್ನು ಇಡುವ ಮೊದಲು ಅಥವಾ ಆಮೆಯನ್ನು ಸಾಕುವ ಮೊದಲು ಕೆಲವೊಂದು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ತುಂಬಾ ಮುಖ್ಯ.
ವಾಸ್ತು ಶಾಸ್ತ್ರದ ಪ್ರಕಾರ, ನಿಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಲು, ನೀವು ಆಮೆಯನ್ನು ಸರಿಯಾದ ದಿನ ಮತ್ತು ಸರಿಯಾದ ದಿಕ್ಕಿನಲ್ಲಿ ಇಡಬೇಕು. ವಿಶೇಷವಾಗಿ ಹುಣ್ಣಿಮೆಯ ದಿನದಂದು ಆಮೆಯನ್ನು ನಿಮ್ಮ ಮನೆಗೆ ತರುವುದು ಯಾವಾಗಲೂ ಶುಭವೆಂದು ಪರಿಗಣಿಸಲಾಗುತ್ತದೆ.
ಹುಣ್ಣಿಮೆಯಂದು ಆಮೆಯನ್ನು ಸ್ವಲ್ಪ ಸಮಯದವರೆಗೆ ಹಾಲಿನಲ್ಲಿ ಇಡಬೇಕು. ಅಭಿಜಿತ್ ಮುಹೂರ್ತದ ಸಮಯದಲ್ಲಿ, ಈ ಆಮೆಯನ್ನು ಹಾಲಿನಿಂದ ಹೊರತೆಗೆದು ನೀರಿನಿಂದ ಚೆನ್ನಾಗಿ ಸ್ವಚ್ಛಗೊಳಿಸಬೇಕು. ಅದರ ನಂತರ, ಒಂದು ಪಾತ್ರೆಯಲ್ಲಿ ಸ್ವಲ್ಪ ನೀರನ್ನು ತೆಗೆದುಕೊಂಡು ಆಮೆಯನ್ನು ಅದರಲ್ಲಿ ಇರಿಸುವುದರಿಂದ ನಿಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ.
ಆಮೆಯ ವಿಗ್ರಹ ಇರಿಸಲು ಸರಿಯಾದ ದಿಕ್ಕು
ಆಮೆ ನೀರಿನಲ್ಲಿ ವಾಸಿಸುವ ಪ್ರಾಣಿಯಾಗಿರುವುದರಿಂದ, ಅದನ್ನು ಇಡುವ ಪಾತ್ರೆಯನ್ನು ನೀರಿನ ದಿಕ್ಕಿನಲ್ಲಿ, ಅಂದರೆ ಈಶಾನ್ಯ ದಿಕ್ಕಿನಲ್ಲಿ ಇಡಬೇಕು. ಅದಾದ ನಂತರ, 'ಓಂ ಶ್ರೀಂ ಕುರ್ಮೈ ನಮಃ' ಎಂಬ ಮಂತ್ರವನ್ನು 11 ಬಾರಿ ಜಪಿಸುವುದರಿಂದ ಉತ್ತಮ ಪ್ರಯೋಜನಗಳು ದೊರೆಯುತ್ತವೆ.
ನಿಮ್ಮ ಮನೆಯಲ್ಲಿ ಶಾಂತಿ ಮತ್ತು ಸಂತೋಷ ಬೇಕಾದರೆ, ಆಮೆಯನ್ನು ನಿಮ್ಮ ಕೋಣೆಯ ಪೂರ್ವ ಭಾಗದಲ್ಲಿ ಇಡಬೇಕು. ಹೀಗೆ ಮಾಡುವುದರಿಂದ ನಿಮ್ಮ ಕುಟುಂಬ ಜೀವನದಲ್ಲಿ ಸಂತೋಷ ನೆಲೆಸುತ್ತದೆ. ಆದರೆ ಲೋಹದ ಆಮೆಯನ್ನು ಯಾವಾಗಲೂ ನೀರಿನಲ್ಲಿ ಇಡಲು ಮರೆಯಬೇಡಿ. ಇವುಗಳ ಜೊತೆಗೆ, ನೀವು ಕೆಲವು ಬಣ್ಣದ ಕಲ್ಲುಗಳನ್ನು ಕೂಡ ಸೇರಿಸಬಹುದು. ಇದು ನಿಮಗೆ ಶಾಂತ ಭಾವನೆಯನ್ನು ನೀಡುತ್ತದೆ. ನಿಮ್ಮ ಆರೋಗ್ಯ ಸುಧಾರಿಸುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯೂ ಸಾಮನ್ಯ ಜ್ಞಾನ ಹಾಗೂ ಮೂಲಗL ಮಾಹಿತಿಯನ್ನು ಆಧರಿಸಿದೆ, ಇದನ್ನು ZEE KANNADA NEWS ಖಚಿತ ಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.